ಸರ್ಕಾರಿ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಪಾಠ
ಹೊಸ ವರ್ಷದ ಪ್ರಯುಕ್ತ ವಿಧಾನಸೌದದಲ್ಲಿ ಹೊಸ ವರ್ಷದ ದಿನದಂದು ಸರ್ಕಾರಿ ಇಲಾಖಾ ಅಧಿಕಾರಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ರಾಜ್ಯದ ಜನತೆಗೆ ಸರ್ಕಾರದ ಸೇವೆಗಳನ್ನು ತ್ವರಿತವಾಗಿ ನೀಡಬೇಕು ಎಂದು ಬುದ್ಧಿವಾದ ಹೇಳಿದರು.
ಸಿ.ಎಂ ಸಿದ್ಧರಾಮಯ್ಯ ಒಬ್ಬ ಶಿಕ್ಷಕರ ರೀತಿಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು ರಾಜ್ಯ ಸರ್ಕಾರದ ಗುರಿಯಾಗಿದ್ದು, ಜನತೆಯ ಕಷ್ಟ ಸುಖಗಳಿಗೆ ಸ್ಪಂದಿಸಲು ಮೊದಲ ಆದ್ಯತೆ ನೀಡಬೇಕು ಎಂದರು.
ಡಾ. ಬಿ ಆರ್ ಅಂಬೇಡ್ಕರ್ ಅವರು ಕೇವಲ ರಾಜಕೀಯ ಸ್ವಾತಂತ್ರ್ಯವಲ್ಲದೇ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯದಿಂದ ಮಾತ್ರ ರಾಜಕೀಯ ಪ್ರಭುತ್ವಕ್ಕೆ ಅರ್ಥ ಬರುತ್ತದೆ ಎಂದು ಪ್ರತಿಪಾದಿಸಿದ್ದರು ಎಂದರು.
ಹೊಸ ವರ್ಷದಲ್ಲಿ ನೌಕರರು ಉತ್ಸಹದಿಂದ ಕೆಲಸ ನಿರ್ವಹಿಸಬೇಕು. ನೀವು ಅಧಿಕಾರಿಗಳು ನಲವತ್ತು ವರ್ಷ ಅಧಿಕಾರದಲ್ಲಿರುತ್ತೀರಿ. ಆದರೆ ನಾವು ಕೇವಲ ಐದು ವರ್ಷ ಮಾತ್ರ ಅಧಿಕಾರದಲ್ಲಿರುತ್ತೇವೆ ಆದ್ದರಿಂದ ರಾಜ್ಯದ ಅಭಿವೃದ್ಧಿ ಕೆಲಸ ಮುನ್ನಡೆಸಲು ಅಧಿಕಾರಿಗಳ ಪಾತ್ರ ಮಹತ್ವದ್ದು ಎಂದು ಅಧಿಕಾರಿಗಳಿಗೆ ಉತ್ಸಾಹ ತುಂಬಿದರು.
ಇದೇ ಸಂದರ್ಭದಲ್ಲಿ ನಾಡಿನ ಜನತೆಗೆ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಯುಗಾದಿ ನಮ್ಮ ಹೊಸ ವರ್ಷವಾಗಿದ್ದರೂ ಸಹ ಕ್ಯಾಲೆಂಡರ್ ವರ್ಷವಾಗಿ ವಿಶ್ವದಾದ್ಯಂತ ಆಚರಿಸಲ್ಪಡುವ ಜನವರಿ ಒಂದನ್ನು ನೂತನ ವರ್ಷವಾಗಿ ನಾವು ಆಚರಿಸುತ್ತಿದ್ದೇವೆ ಎಂದ ಅವರು ರಾಜ್ಯದ ಜನತೆ ಹೊಸ ವರ್ಷ 2026 ರಲ್ಲಿ ಸುಖ ಸಮೃದ್ಧಿ ಶಾಂತಿಯಿಂದ ಬಾಳಲಿ ಎಂದು ಆಶಿಸಿದರು.
ಇತರೆ ಸುದ್ದಿಗಳು