ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�
ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ರಾಮಾಪುರ, ಅಜ್ಜೀಪುರ ಮಾರ್ಗವಾಗಿ ಹನೂರು , ಕೊಳ್ಳೇಗಾಲ ಚಾಮರಾಜನಗರ , ಮೈಸೂರು ಕಡೆಗಳಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಶಾಲಾ ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆ.
ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಸ್ಟೂಟೆಂಡ್ ಪಾಸ್ ಮಾಡಿಸಿದ್ದರೂ ಸಹ ತಮಿಳುನಾಡಿನ ಸರ್ಕಾರಿ ಬಸ್ ಅಥವಾ ಖಾಸಗಿ ಬಸ್ ಗಳನ್ನೇ ಅವಲಂಭಿಸುವ ಪರಿಸ್ಥಿತಿ ಬಂದೊದಗಿದೆ.
ರಾಮಾಪುರ-ಅಜ್ಜೀಪುರ ಮಾರ್ಗವಾಗಿ ಕೆ.ಎಸ್.ಆರ್.ಟಿ. ಸಿ ಬಸ್ಗಳು ಬಂದರೂ ನಿಲುಗಡೆ ನೀಡದೇ ಪ್ರಯಾಣಿಸುತ್ತದೆ. ಒಂದೆರಡು ಬಸ್ ಗಳು ನಿಲುಗಡೆಯಾದರೂ ಅದರಲ್ಲಿ ಕುರಿಗಳನ್ನು ತುಂಬುವ ಹಾಗೆ ಪ್ರಯಾಣಿಕರನ್ನು ತುಂಬಿಕೊಂಡು ಸಾಗಲಿದೆ. ಬಸ್ಗಳಲ್ಲಿ ಪ್ರಯಾಣಿಸುವವರು ಜೀವವನ್ನು ಕೈಯಲ್ಲಿಟ್ಟುಕೊಂಡು ಸಾಗುವ ಪರಿಸ್ಥಿತಿ ಬಂದಿದೆ.
ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಹ ಕೆ.ಎಸ್.ಆರ್.ಟಿ.ಸ ಅಧಿಕಾರಿಗಳು ಮೌನವಾಗಿರುವುದು ಜಾಣಕುರುಡು ಎನ್ನುವಂತಾಗಿದೆ. ಈಗಲಾದರೂ ಸಹ ಬಸ್ ಗಳನ್ನು ಸಮಯಕ್ಕೆ ಸರಿಯಾಗಿ ಸಂಚಾರ ಮಾಡುವಂತೆ ಹಾಗೂ ಹೆಚ್ಚುವರಿ ಬಸ್ಗಳನ್ನು ಸಂಚಾರ ಮಾಡಲು ಕ್ರಮವಹಿಸಬೇಕಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.
ಇತರೆ ಸುದ್ದಿಗಳು