ನಿಮ್ಮ ಜನ್ಮ ಸಂಖ್ಯೆಯ ಪ್ರಕಾರ ಕೆಲವೊಂದು ಮಹಾಭಾರತದ ಪಾತ್ರಗಳು ಹೋಲುತ್ತದೆ ನೋಡೋಣ ಬನ್ನಿ!
ಮಹಾಭಾರತದ ಕೆಲವೊಂದು ಪಾತ್ರಗಳು ಅವಿಸ್ಮರಣೀಯ ಪಾತ್ರವೆಂದು ಹೇಳಲಾಗುತ್ತದೆ. ಇಂದಿಗೂ ಜನರು ಈ ಪಾತ್ರಗಳನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಿರುತ್ತಾರೆ. ಕೆಲವೊಂದು ದಿನಾಂಕದಂದು ಜನಿಸಿದ ಜನರು ಮಹಾಭಾರತದಲ್ಲಿನ ಪಾತ್ರಗಳ ಗುಣಗಳನ್ನೇ ಹೊಂದಿರುತ್ತಾರೆ. ಯಾವೆಲ್ಲಾ ದಿನಾಂಕದಂದು ಜನಿಸಿದವರು ಮಹಾಭಾರತದ ಯಾವೆಲ್ಲಾ ಪಾತ್ರಗಳನ್ನು ಹೋಲುತ್ತಾರೆ.?
ಮಹಾಭಾರತದಲ್ಲಿ ಹೇಳಲಾದ ಕಥೆಗಳು ನಮಗೆ ಜೀವನ ಪಾಠವನ್ನು, ತಾಳ್ಮೆಯನ್ನು, ಶಕ್ತಿಯನ್ನು, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು, ಸರಿ - ತಪ್ಪುಗಳ ನಡುವಿನ ವ್ಯತ್ಯಾಸವನ್ನು ನಮಗೆ ಕಲಿಸುತ್ತದೆ. ಬಹುಶಃ ಈ ಕಾರಣಕ್ಕಾಗಿ ಜನರು ಇಂದಿಗೂ ಸಾವಿರಾರು ವರ್ಷಗಳ ಹಿಂದಿನ ಮಹಾಭಾರತವನ್ನು ಮೆಲುಕು ಹಾಕುತ್ತಾರೆ.
ಇಂದಿಗೂ ಜನರು ಮಹಾಭಾರತದ ಕೆಲವೊಂದು ಪಾತ್ರಗಳ ವ್ಯಕ್ತಿತ್ವವನ್ನು ತಮ್ಮಲ್ಲೂ ರೂಢಿಸಿಕೊಳ್ಳಲು ಬಯಸುತ್ತಾರೆ. ಉದಾಹರಣೆಗೆ, ಅರ್ಜುನನಲ್ಲಿದ್ದ ಧೈರ್ಯವನ್ನು, ಕರ್ಣನಲ್ಲಿದ್ದ ದಾನ, ತ್ಯಾಗದ ಗುಣಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ನೀವು ಬಯಸಿ ಅಥವಾ ಬಯಸದೇ ಇರಿ ನಿಮ್ಮ ಜನ್ಮ ಸಂಖ್ಯೆಯ ಪ್ರಕಾರ ಕೆಲವೊಂದು ಮಹಾಭಾರತದ ಪಾತ್ರಗಳು ನಿಮಗೆ ಹೋಲಿಕೆಯಾಗುತ್ತದೆ.
ದಿನಾಂಕ 1, 10, 19, 28 - ಕರ್ಣ ನೀವು ಯಾವುದೇ ಒಂದು ತಿಂಗಳ 1, 10, 19 ಮತ್ತು 28ನೇ ತಾರೀಕಿನಂದು ಜನಿಸಿದವರಾಗಿದ್ದರೆ ನೀವು ಕರ್ಣನ ಗುಣಗಳನ್ನು ಹೊಂದಿರುತ್ತೀರಿ. ಜನರು ನಿಮ್ಮಲ್ಲಿ ಕರ್ಣನ ಗುಣಗಳಾದ ಸ್ವಾಭಿಮಾನವನ್ನು, ತ್ಯಾಗವನ್ನು, ನಿಷ್ಠೆಯನ್ನು, ನಿಷ್ಠೆಯನ್ನು, ದಾನದ ಗುಣಗಳನ್ನು ಮತ್ತು ಬಲಿಷ್ಠತೆಯನ್ನು ಹೊಂದಿರುತ್ತೀರಿ. ಅವರ ಸ್ವಭಾವವು ಮಹಾಭಾರತದ ಕರ್ಣನ ಸ್ವಭಾವಕ್ಕೆ ಹೊಂದಿಕೆಯಾಗುತ್ತದೆ. ಕರ್ಣನು ಉದಾರ, ಧೈರ್ಯಶಾಲಿ ಮತ್ತು ತನ್ನ ತತ್ವಗಳಿಗೆ ಬದ್ಧನಾಗಿದ್ದ ಯೋಧನಾಗಿದ್ದನು. ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಹ ಅವನು ತಾನು ಕೊಟ್ಟ ಮಾತನ್ನು ತಪ್ಪಿದವನಲ್ಲ.
ದಿನಾಂಕ 2, 11, 20, 29 - ಭೀಷ್ಮ ಒಂದು ತಿಂಗಳ 2, 11, 20 ಮತ್ತು 29ನೇ ತಾರೀಕಿನಂದು ಜನಿಸಿದವರಾಗಿದ್ದರೆ ನೀವು 'ಭೀಷ್ಮ'ರ ಗುಣಗಳನ್ನು ಹೊಂದಿರುತ್ತೀರಿ. ಭೀಷ್ಮರು ಮಹಾಭಾರತದಲ್ಲಿ ಗೌರವಾನ್ವಿತ ಸ್ಥಾನದಲ್ಲಿದ್ದರು. ಭೀಷ್ಮರು ಭಾವನಾತ್ಮಕವಾಗಿ ಸೂಕ್ಷ್ಮ ಸ್ವಭಾವವನ್ನು ಹೊಂದಿದವರಾಗಿದ್ದರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿದ್ದರು. ಅವರು ತಮ್ಮ ಸಂಪೂರ್ಣ ಜೀವನವನ್ನು ಮಾತು ಮತ್ತು ಕರ್ತವ್ಯಕ್ಕೆ ಮೀಸಲಾಗಿಟ್ಟರು. ಅಂತಹ ಹಿರಿಯ ವಯಸ್ಸಿನಲ್ಲೂ ಅವರು ಮಹಾಭಾರತ ಯುದ್ಧ ಭೂಮಿಯಲ್ಲಿ ಕೌರವ ಸೇನೆಯ ಸೇನಾಧಿಪತಿಯಾಗಿ ಗುರುತಿಸಿಕೊಂಡವರು.
ದಿನಾಂಕ 3, 12, 21, 30 - ದ್ರೋಣಾಚಾರ್ಯ ದಿನಾಂಕ 3, 12, 21, 30ನೇ ತಾರೀಕಿನಂದು ಜನಿಸಿದವರು ದ್ರೋಣಾಚಾರ್ಯರ ಗುಣಗಳನ್ನು ತಮ್ಮಲ್ಲಿ ಹೊಂದಿರುತ್ತಾರೆ. ದ್ರೋಣಾಚಾರ್ಯರು ಮಹಾನ್ ಜ್ಞಾನಿಯಾಗಿದ್ದವರು. ಅವರು ಶಿಕ್ಷಣದಲ್ಲಿ, ಮಾರ್ಗದರ್ಶನದಲ್ಲಿ ಅಪಾರ ಖ್ಯಾತಿಯನ್ನು ಗಳಿಸಿದ್ದರು. ರಾಜಮನೆತನದ ಶಿಕ್ಷಕರಾಗಿದ್ದರು. ಮಹಾಭಾರತದಲ್ಲಿ ಕೌರವರು ಮತ್ತು ಪಾಂಡವರಿಗೆ ಯುದ್ಧಕಲೆಗಳನ್ನು ಕಲಿಸಿಕೊಟ್ಟ ರಾಜಗುರುವಾಗಿದ್ದ ದ್ರೋಣರು ಯುದ್ಧದ ಸಮಯದಲ್ಲಿ ಕೌರವ ಸೈನ್ಯದ ಎರಡನೇ ಪ್ರಧಾನ ಸೈನ್ಯಾಧಿಪಿಗಳಾಗಿದ್ದರು.
ದಿನಾಂಕ 4, 13, 22, 31 - ದುರ್ಯೋಧನ ಮಹಾಭಾರತದಲ್ಲಿ ದುರ್ಯೋಧನನ್ನು ಮಹತ್ವಾಕಾಂಕ್ಷಿ ರಾಜ, ಹಠಮಾರಿ ಮತ್ತು ಅಧಿಕಾರದ ಮದವನ್ನು ಹೊತ್ತುಕೊಂಡಿದ್ದ ರಾಜನಾಗಿದ್ದ. ದಿನಾಂಕ 4, 13, 22, 31ನೇ ತಾರೀಕಿನಂದು ಜನಿಸಿದವರು ದುರ್ಯೋಧನನಲ್ಲಿದ್ದ ಈ ಗುಣಗಳಲ್ಲಿ ಒಂದಾದರೂ ಗುಣವನ್ನು ಹೊಂದಿರುತ್ತಾರೆ. ಕರ್ಣ ಮತ್ತು ದುರ್ಯೋಧನ ಆಪ್ತ ಮಿತ್ರರಾಗಿದ್ದರೂ ಕರ್ಣನ ಗುಣಗಳನ್ನು ದುರ್ಯೋಧನ ತನ್ನಲ್ಲಿ ಬೆಳೆಸಿಕೊಂಡಿರಲಿಲ್ಲ. ಅವನ ಮನಸ್ಸಿನಲ್ಲಿ ಪಾಂಡವರ ವಿರುದ್ಧ ಸೇಡು ತೀರಿಸಿಕೊಳ್ಳುವುದನ್ನು ಬಿಟ್ಟರೆ ಬೇರೇನೂ ಇರಲಿಲ್ಲ.
ದಿನಾಂಕ 5, 14, 23 - ಕೃಷ್ಣ ಯಾವ ವ್ಯಕ್ತಿ ದಿನಾಂಕ 5, 14, 23ನೇ ತಾರೀಕಿನಂದು ಜನಿಸಿರುತ್ತಾನೋ ಅವನು ಶ್ರೀಕೃಷ್ಣನಲ್ಲಿನ ಗುಣಗಳನ್ನು ತನ್ನಲ್ಲಿಯೂ ಹೊಂದಿರುತ್ತಾನೆ. ಮಹಾಭಾರತದಲ್ಲಿ ಶ್ರೀಕೃಷ್ಣನು ತೀಕ್ಷ್ಣವಾದ ಮನಸ್ಸನ್ನು, ಉತ್ತಮ ಸಂವಹನ ಕಲೆಯನ್ನು, ತಂತ್ರಗಳನ್ನು ರೂಪಿಸುವಲ್ಲಿ ಹೆಸರುವಾಸಿಯಾಗಿದ್ದನು. ಕಷ್ಟದ ಸಮಯದಲ್ಲು ಉತ್ತಮ ಸಲಹೆಯನ್ನು ನೀಡುತ್ತಿದ್ದ ಕೃಷ್ಣ ಮಹಾಭಾರತ ಯುದ್ಧದಲ್ಲಿ ಧರ್ಮದ ಪರ ನಿಂತು ಪಾಂಡವರು ಯುದ್ಧವನ್ನು ಗೆಲ್ಲುವಂತೆ ಮಾಡುತ್ತಾನೆ. ಅಂದು ಕೃಷ್ಣನು ನೀಡಿದ್ದ ಭಗವದ್ಗೀತೆ ಬೋಧನೆಯನ್ನು ಜನರು ಇಂದಿಗೂ ರೂಢಿಸಿಕೊಂಡಿದ್ದಾರೆ.
ದಿನಾಂಕ 6, 15, 24 - ದ್ರೌಪದಿ ಮಹಾಭಾರತದಲ್ಲಿ ದ್ರೌಪದಿಯ ಪಾತ್ರ ಅಜರಾಮರ. ಯಾಕೆಂದರೆ ಮಹಾಭಾರತ ನಡೆಯಲು ಮುಖ್ಯ ಕಾರಣೀಕರ್ತರು ಎಂದು ನಾವು ಯಾರನ್ನು ಗುರುತಿಸುತ್ತೇವೋ ಅವರಲ್ಲಿ ದ್ರೌಪದಿಯೂ ಒಬ್ಬಳಾಗಿದ್ದಳು. ದ್ರೌಪದಿ ಅತ್ಯಂತ ಸುಂದರಿ, ಸ್ವಾಭಿಮಾನಿ ಸ್ತ್ರೀ, ಭಾವನಾತ್ಮಕವಾಗಿ ಶಕ್ತಿವಂತಳಾಗಿದ್ದಳು. ದ್ರೌಪದಿ ಅನ್ಯಾಯವನ್ನು ಮೆಟ್ಟಿ ನಿಂತವಳು. ದ್ರೌಪದಿಯಷ್ಟೇ ಗಟ್ಟಿಗಿತ್ತಿಯರು ಯಾವುದೇ ತಿಂಗಳ 6, 15, 24ನೇ ತಾರೀಕಿನಂದು ಜನಿಸಿದ ಜನರು ಹೊಂದಿರುತ್ತಾರೆ.
ದಿನಾಂಕ 7, 8, 9 - ಯುಧಿಷ್ಠಿರ ಯುಧಿಷ್ಠಿರನಷ್ಟು ನ್ಯಾಯವಂತನನ್ನು, ಶಿಸ್ತುವಂತನನ್ನು ನಾವು ಮಹಾಭಾರತದಲ್ಲಿ ಮತ್ತೊಬ್ಬರನ್ನು ನೋಡಲು ಸಾಧ್ಯವಿಲ್ಲ. ಈ 7 ಸಂಖ್ಯೆಯು ಯುಧಿಷ್ಠಿರನನ್ನು ಹೋಲಿದರೆ, 8 ವಿದುರನನ್ನು ಹೋಲುತ್ತದೆ. ಸಂಖ್ಯೆ 9 ಧೈರ್ಯ ಮತ್ತು ಶಕ್ತಿಗೆ ಹೆಸರುವಾಸಿಯಾದ ಭೀಮನನ್ನು ಹೋಲುತ್ತದೆ.
ಇತರೆ ಸುದ್ದಿಗಳು