ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಇಂದು ಜನವರಿ 12, ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ"
ವರದಿಗಾರರು : ಮಮತಾ | ಸ್ಥಳ : Bengaluru | ದಿನಾಂಕ : 12-01-2026

ಇಂದು ಜನವರಿ 12, ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ"

ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ, ಭಾರತವನ್ನು ತಿಳಿಯಬೇಕೆಂದರೆ ಸ್ವಾಮಿ ವಿವೇಕಾನಂದರನ್ನು ಓದಿ' ಎಂದು ಕವಿ ರವೀಂದ್ರನಾಥ ಠಾಗೂರರು ಹೇಳುತ್ತಾರೆ. ವಿವೇಕಾನಂದರ ಬದುಕೇ ಇಡೀ ಭಾರತದ ಚಿತ್ರಣವಾಗಿದೆ. ಅವರ ಜೀವನದಲ್ಲಿ ಘಟಿಸಿದ ಪ್ರಸಂಗಗಳು ಯಶೋಗಾಥೆಯಷ್ಟೇ ಅಲ್ಲ ದಾರಿ ದೀಪವೂ ಹೌದು.

ಇಂದು ಜನವರಿ 12, ಸ್ವಾಮಿ ವಿವೇಕಾನಂದರ 163ನೇ ಜನ್ಮದಿನ. ವಿಶ್ವವನ್ನೇ ಬೆರಗುಗೊಳಿಸಿದ ಭಾರತದ ವೀರ ಸನ್ಯಾಸಿಯ ಜನ್ಮದಿನವನ್ನು 'ರಾಷ್ಟ್ರೀಯ ಯುವ ದಿನ'ವನ್ನಾಗಿ ಆಚರಿಸಲಾಗುತ್ತದೆ. ಭಾರತದತ್ತ ಇಡೀ ಜಗತ್ತೇ ತಿರುಗಿ ನೋಡುವಂತೆ ಮಾಡಿವೆ.

ತಾಯಿಗೆ ದೂರುಗಳ ಮಾಲೆ ವಿವೇಕಾನಂದರಿಗೆ ಬಾಲ್ಯದಲ್ಲಿತಾಯಿ 'ವೀರೇಶ್ವರ' ಎಂದು ಹೆಸರಿಟ್ಟರು. ಬಂಗಾಳಿಯಲ್ಲಿ ಬೀರೇಶ್ವರ. ಸ್ನೇಹಿತರು ಪ್ರೀತಿಯಿಂದ ಅವನನ್ನು 'ಬಿಲೇ' ಎಂದು ಕರೆಯುತ್ತಿದ್ದರು. ಶಾಲೆಗೆ ಸೇರಿಸುವಾಗ ಅವನ ಹೆಸರನ್ನು ಔಪಚಾರಿಕವಾಗಿ ನರೇಂದ್ರನಾಥ ದತ್ತ ಎಂದು ಬದಲಿಸಲಾಯಿತು.

ಶಾಲೆಯಲ್ಲಿಎಲ್ಲರೂ ಅವನನ್ನು ನರೇನ್‌ ಎಂದು ಕರೆದರು. ಬಿಲೇ ಚೂಟಿಯಾದ ಬುದ್ಧಿಶಾಲಿ ಮಗು, ತುಂಟ. ಶ್ರೀಕೃಷ್ಣ ಮಗುವಾಗಿದ್ದಾಗ ಯಶೋದೆಗೆ ಅವನ ಮೇಲೆ ಹೇಗೆ ದೂರುಗಳು ಬರುತ್ತಿದ್ದವೋ ಹಾಗೆಯೇ ಬಿಲೆಯ ತುಂಟತನದ ಮೇಲೆಯೂ ತಾಯಿ ಭುವನೇಶ್ವರಿಯ ಹತ್ತಿರ ದೂರುಗಳು ಬರುತ್ತಿದ್ದವು. ಅದಕ್ಕೇ ಅವನ ಮಿತ್ರರು ಅವನಿಗೆ 'ಪಗಲಾ ಬಿಲೇ' (ಹುಚ್ಚು ಬಿಲೆ) ಎಂದು ಅಡ್ಡ ಹೆಸರಿಟ್ಟಿದ್ದರು. ಇತನ ಚೇಷ್ಟೆ ತಾಳಲಾರದೇ ತಾಯಿ ಭುವನೇಶ್ವರಿ ದೇವಿ, ''ಶಿವನನ್ನು ಮಗನಿಗಾಗಿ ಕೇಳಿಕೊಂಡೆ. ಅವನು ತನ್ನ ತುಂಟ ರಾಕ್ಷಸನನ್ನು ಕಳುಹಿಸಿದ್ದಾನೆ,'' ಎಂದು ತಮಾಷೆಯಾಗಿ ಹೇಳುತ್ತಿದ್ದಳು.

ನನಗೂ ಇಂಗ್ಲೀಷ್‌ ಬರುತ್ತೆ! ಒಂದು ಸಲ ರಜಪುಟಾನದಲ್ಲಿರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಅವರ ಜೊತೆ ಇಬ್ಬರು ಆಂಗ್ಲರು ಪ್ರಯಾಣಿಸುತ್ತಿದ್ದರು. ವಿವೇಕಾನಂದರನ್ನು ಮೂಢ ಎಂದು ತಿಳಿದು ಅವರು ತಮ್ಮ ಭಾಷೆಯಲ್ಲಿ ಮಾತನಾಡುತ್ತಾ ಗೇಲಿ ಮಾಡಿದರು. ಇದನ್ನು ಕೇಳಿಯೂ ಅರ್ಥಮಾಡಿಕೊಳ್ಳದಿದ್ದ ಹಾಗೆ ವಿವೇಕಾನಂದರು ಸುಮ್ಮನಿದ್ದರು.

ಮುಂದಿನ ರೈಲು ನಿಲ್ದಾಣದಲ್ಲಿಇನ್ನೊಬ್ಬ ಬ್ರಿಟಿಷ್‌ ಅಧಿಕಾರಿ ಬಂದು ವಿವೇಕಾನಂದರನ್ನು ಗುರುತಿಸಿ, ''ಏನಾದರೂ ಬೇಕೇ?,'' ಎಂದು ಕೇಳಿದಾಗ ಅವರು ಇಂಗ್ಲಿಷಿನಲ್ಲಿ ತಮಗೆ ಕುಡಿಯಲು ನೀರು ಬೇಕೆಂದು ಕೇಳಿದರು. ಆಗ ಗೇಲಿ ಮಾಡಿದ್ದ ಆಂಗ್ಲಸಹಪ್ರಯಾಣಿಕರು ತಮ್ಮ ನಡವಳಿಕೆಗೆ ತಾವೇ ನಾಚಿಕೊಂಡು ಕ್ಷಮೆಯಾಚಿಸಿದರು. ಮಗು ಬೇಕೆಂದವಳಿಗೆ ತಾವೇ ಮಗುವಾದರು !

ವಿವೇಕಾನಂದರಿಂದ ಪ್ರಭಾವಿತರಾಗಿದ್ದ ವಿದೇಶಿ ಮಹಿಳೆಯೊಬ್ಬರು ಸನ್ಯಾಸಿಯಾಗಿದ್ದರೂ ಸಹ ಅವರನ್ನು ವಿವಾಹವಾಗಿ ಅವರಂಥ ಗುಣಗಳಿರುವ ಮಗುವನ್ನು ಪಡೆಯುವ ಆಸೆಯನ್ನು ವ್ಯಕ್ತಪಡಿಸಿದಳು. ಆಗ ವಿವೇಕಾನಂದರು ನಾನೇ ನಿಮ್ಮ ಮಗು ಭಾವಿಸಿ ಎಂದು ಹೇಳುವ ಮೂಲಕ ಆ ಮಹಿಳೆಯನ್ನು ಚಕಿತರನ್ನಾಗಿಸಿ ಆಕೆಯ ಆಸೆಯನ್ನು ಪೂರ್ಣಗೊಳಿಸಿ, ತಮಗಿರುವ ಅಲೌಕಿಕ ಮತ್ತು ಆಧ್ಯಾತ್ಮಿಕ ವ್ಯಕ್ತಿತ್ವವನ್ನು ತೆರೆದಿಟ್ಟರು.

1893ರಲ್ಲಿಅಮೆರಿಕಕ್ಕೆ ಭೇಟಿ ನೀಡಿದ್ದ ಸ್ವಾಮಿ ವಿವೇಕಾನಂದರು ಕೇಸರಿ ವಸ್ತ್ರ ಧರಿಸಿ ಶಿಕಾಗೊ ನಗರದ ಪ್ರಮುಖ ರಸ್ತೆಗಳಲ್ಲಿಓಡಾಡಿದರು. ಅಮೆರಿಕನ್ನರಿಗದು ಸಂಪೂರ್ಣ ಹೊಸತು. ಹಾಗಾಗಿ ದಾರಿಯಲ್ಲಿಒಬ್ಬ ಮಹಿಳೆ ತನ್ನೊಂದಿಗಿದ್ದ ಪತಿಯ ಕಿವಿಯಲ್ಲಿಪಿಸುಗುಟ್ಟಿದಳು. ಆ ಮಹಿಳೆ ''ನನಗನ್ನಿಸುತ್ತೆ ಈ ವ್ಯಕ್ತಿ ಒಬ್ಬ ಸಂಭಾವಿತ ಎನಿಸುತ್ತಿಲ್ಲ,'' ಎಂದಳು. ಈ ಮಾತು ವಿವೇಕಾನಂದರ ಕಿವಿಗೆ ತಾಕಿತು. ಕೂಡಲೇ ವಿನಮ್ರರಾಗಿ ಪ್ರತಿಕ್ರಿಯಿಸಿದ ಅವರು, ''ಕ್ಷಮಿಸಿ ಮೇಡಂ, ನಿಮ್ಮ ದೇಶದಲ್ಲಿಒಬ್ಬ ವ್ಯಕ್ತಿಯನ್ನು ಸಂಭಾವಿತನನ್ನಾಗಿಸಲು ದರ್ಜಿ ಬೇಕು. ಆದರೆ ನನ್ನ ದೇಶದಲ್ಲಿವ್ಯಕ್ತಿತ್ವವೊಂದೇ ಸಂಭಾವಿತನನ್ನು ನಿರ್ಧರಿಸುತ್ತದೆ,'' ಎಂದರು.

ಇಂಗ್ಲೆಂಡಿನಲ್ಲಿವಿವೇಕಾನಂದರನ್ನು ಭೇಟಿಯಾದ ಮಾರ್ಗರೆಟ್‌ ನೋಬಲ್‌ ಎಂಬ ಯುವತಿ ಸನಾತನ ಧರ್ಮದ ಸೆಳೆತಕ್ಕೆ ಸಿಕ್ಕಿ ವಿವೇಕರ ಶಿಷ್ಯೆಯಾಗಿ ನಿವೇದಿತಾ ಎಂಬ ಭಾರತೀಯ ಹೆಸರಿಟ್ಟುಕೊಂಡು ಸಿಸ್ಟರ್‌ ನಿವೇದಿತಾ ಎಂಬ ಹೆಸರಿನಲ್ಲಿಭಾರತೀಯಳೇ ಆಗಿಹೋದರು. ಫ್ರಾನ್ಸ್‌ನ ಖ್ಯಾತ ನಟಿಯಾದ ಸಾರಾ ಬರ್ಮಹಾರ್ಡಿಟ್‌ 1896ರಲ್ಲಿಸ್ವಾಮಿ ವಿವೇಕಾನಂದರ ತತ್ವ ಸಿದ್ಧಾಂತಗಳಿಂದ ಪ್ರೇರಣೆಗೊಂಡು ಪಾಶ್ಚಾತ್ಯ ದೇಶಗಳಲ್ಲಿಭಾರತೀಯ ತತ್ವಶಾಸ್ತ್ರ ಮತ್ತು ವೇದಾಂತವನ್ನು ಪರಿಚಯಿಸುವಲ್ಲಿಆಸಕ್ತಿ ಹೊಂದಿದರು. ಸುಭಾಷ್‌ಚಂದ್ರ ಬೋಸ್‌, ಅರವಿಂದೋ ಘೋಷ್‌, ಭಾಘ್‌ ಜತಿನ್‌, ಮಹಾತ್ಮ ಗಾಂಧಿ, ರವಿಂದ್ರನಾಥ ಠಾಗೋರ್‌, ಚಕ್ರವರ್ತಿ ರಾಜಗೋಪಾಲಾಚಾರಿ, ಜವಾಹರಲಾಲ್‌ ನೆಹರು, ಬಾಲ ಗಂಗಾಧರ ತಿಲಕ್‌, ಜಗದೀಶ್‌ ಚಂದ್ರ ಬೋಸ್‌, ಆಯನಿ ಬೆಸಂಟ್‌, ರೊಮಿನ್‌ ರೊಲಾಂಡ್‌ ಸೇರಿದಂತೆ ವಿಶ್ವಾದ್ಯಂತ ವಿವೇಕಾನಂದರ ಪ್ರಭಾವಕ್ಕೆ ಒಳಗಾದ ಗಣ್ಯರ ಪಟ್ಟಿಯಲ್ಲಿದ್ದಾರೆ.

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49039+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49072+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49073+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49101+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49266+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49333+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49454+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49639+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49584+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49751+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49756+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49773+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49770+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49795+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49816+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51274+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51359+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51683+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51688+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52121+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52106+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57066+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57048+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57058+