ತುಮಕೂರಿನಲ್ಲಿ ಪತ್ರಕರ್ತರ ಸಂಘದಿಂದ ಸಾಧಕರಿಗೆ ಸನ್ಮಾನ
ತುಮಕೂರು, ಸೆಪ್ಟೆಂಬರ್ 21: ಕಾರ್ಯನಿರತ ಪತ್ರಕರ್ತರ ಸಂಪಾದಕರ ಹಾಗೂ ವರದಿಗಾರರ ಸಂಘ (ರಿ.) ವತಿಯಿಂದ, ತುಮಕೂರು ಜಿಲ್ಲೆಯ ಸಮಾಜಸೇವಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಸಮಾರಂಭವನ್ನು ಭಾನುವಾರ ಸರಸ್ವತಿಪುರಂನ ಧಾರಿಣೆ ಆರ್ಕೇಡ್ನಲ್ಲಿ ಆಯೋಜಿಸಲಾಯಿತು.
ಜನತೆ ವಾಯ್ಸ್ ನ ಸಂಪಾದಕರಾದ ರಫೀಕ್ ಅಹಮ್ಮದ್ ಮತ್ತು ,ಮೊಯಿನ್,ರಾಜ್ಯ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶ್ರೀ ಶಶಿಕಾಂತ್ ಆತ್ಮರಾಮ್ ಕಾಂಬಳೆ ಅಧ್ಯಕ್ಷತೆ ವಹಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಸಿ. ಗೋಪಾಲ್, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಶ್ರೀ ನರಸಿಂಹಮೂರ್ತಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಡಾ. ಹೆಚ್. ನಾಗರಾಜ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಶೇಷ ಆಹ್ವಾನಿತರಾಗಿ ಸಮಾಜಸೇವಕ ಶ್ರೀ ಮಹೇಂದ್ರ ಮುನ್ನೋತ್, ಹಾಸ್ಯನಟ ಶ್ರೀ ಮೈಸೂರು ರಮಾನಂದ್, ಹಾಗೂ ಕಲಾವಿದೆ ಶ್ರೀಮತಿ ಮೈಸೂರು ಮಂಜುಳಾ (ಜೂನಿಯರ್ ಮಾಲಾಶ್ರೀ) ಹಾಜರಿದ್ದರು.
ಸನ್ಮಾನಿತರು ; ನಜ್ರುಲ್ಲಾ ಬೇಗ್ , ಝೇಬ ಈರಂ ಮತ್ತು ,ಮೊಯಿನ್ , ಇತರರು ಇದ್ದರು ಮುಖ್ಯ ಅತಿಥಿಗಳಾಗಿ ಡಾ. ನಾಗಣ್ಣ (ಗೃಹ ಸಚಿವರ ಆಪ್ತ ಸಹಾಯಕ), ಶ್ರೀ ಕೃಷ್ಣಪ್ಪ (ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು), ಶ್ರೀ ಅವಿನಾಶ್ ವಿ. (ಪೊಲೀಸ್ ವೃತ್ತ ನಿರೀಕ್ಷಕರು, ತುಮಕೂರು), ಶ್ರೀ ವಿಜಯ್ ಮುನಿಯಪ್ಪ (ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷರು), ಶ್ರೀ ಸಂಜಯ್ ಸಾವಂತ್ (ರಾಜ್ಯ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಜನಶ್ರೀ ನ್ಯೂಸ್ ವಾಹಿನಿಯ ಮುಖ್ಯಸ್ಥರು), ಶ್ರೀಮತಿ ಬಿ. ಯಶಸ್ವಿನಿ (ರಾಜ್ಯ ಸಂಘಟನಾ ಸಂಚಾಲಕಿ), ಶ್ರೀ ಉಬೇದ್ ಉಲ್ಲಾ ಶರೀಫ್ (ಮಾಲೀಕರು, ವಾಲ್ಲೋ ಟ್ರಾಕ್ಟರ್ ಶೋರೂಂ) ಹಾಗೂ ಶ್ರೀ ಬಿ.ಕೆ. ಮಂಜುನಾಥ್ (ಹೇಮಾವತಿ ಆಗೋ ಎಕ್ಯೂಪ್ಮೆಂಟ್, ತುಮಕೂರು) ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ನೀಡಿ, ಸಂಘಟಕರು ಹಾಗೂ ಅತಿಥಿಗಳು ಅವರ ಸಾಧನೆಗಳನ್ನು ಕೊಂಡಾಡಿದರು.
ಇತರೆ ಸುದ್ದಿಗಳು