ವರದಿಗಾರರು :
ನಾ.ಅಶ್ವಥ್ ಕುಮಾರ್, ||
ಸ್ಥಳ :
ಚಾಮರಾಜನಗರ
ವರದಿ ದಿನಾಂಕ :
01-12-2025
ದಿಂಬಂ ಘಾಟ್ನಲ್ಲಿ ರಾಜ್ಯದ ಹಾಸನ ಕಾರು ಪಲ್ಟಿ
ಚಾಮರಾಜನಗರ : ರಾಜ್ಯದ ಹಾಸನದಿಂದ ನೆರೆಯ ತಮಿಳುನಾಡಿನ ತಿರುಚ್ಚಿಗೆ ತೆರಳುತ್ತಿದ್ದ ಕಾರೊಂದು ಪಲ್ಟಿಯಾದ ಘಟನೆ ಚಾಮರಾಜನಗರ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ದಿಂಬಂ ಘಾಟ್ ನಲ್ಲಿ ನಡೆದಿದೆ. ಹಾಸನದಿಂದ ಆರು ಜನರು ಕಾರಿನಲ್ಲಿ ಚಾಮರಾಜನಗರ ಮೂಲಕ ತಮಿಳುನಾಡಿನ ತಿರುಚ್ಚವಿಗೆ ಪ್ರಯಾಣ ಬೆಳಸಿದ್ದರು. ಕಾರು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ತಮಿಳುನಾಡಿನ ದಿಂಬಂ ಘಾಟ್ನ ಮೊದಲ ಸುತ್ತಿನಲ್ಲಿ ಪಲ್ಟಿಯಾಗಿದೆ.
ಕಾರು ಪಲ್ಟಿಯಾಗಿ ಕಂದಕಕ್ಕೆ ಉರುಳಿದ್ದು, ಅದೃಷ್ಟವಷಾತ್ ಕಾರಿನಲ್ಲಿದ್ವವರಿಗೆ ಯಾವುದೇ ಪ್ರಾಣಪಾಯವಿದಲ್ಲದೆ, ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ತಮಿಳುನಾಡಿನ ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
