ವರದಿಗಾರರು :
: ಸಂಗನಗೌಡ ಗಬಸಾವಳಗಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
15-11-2025
“ಹೇಮರಡ್ಡಿ ಮಲ್ಲಮ್ಮ ಸಂಘ: ಬಿ.ಎನ್. ಹಿಪ್ಪರಗಿ–ರವಿಂದ್ರನಾಥಗೌಡ ಪಾಟೀಲ ಅವಿರೋಧ ಆಯ್ಕೆ”
ಪಟ್ಟಣದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ಆಯ್ಕೆ ಪ್ರಕ್ರಿಯೆ ಶುಕ್ರವಾರ ಸಂಘದ ಸಭಾಭವನದಲ್ಲಿ ಶಾಂತಿಯುತವಾಗಿ ನೆರವೇರಿತು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳಿಗೆ ತಲಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ, ಬಿ.ಎನ್. ಹಿಪ್ಪರಗಿ ಅವರನ್ನು ಅಧ್ಯಕ್ಷರಾಗಿ ಹಾಗೂ ರವಿಂದ್ರನಾಥಗೌಡ ಪಾಟೀಲ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ವಿಜಯಕುಮಾರ ಉತ್ನಾಳ ಘೋಷಿಸಿದರು.
ಕಾರ್ಯಕ್ರಮದಲ್ಲಿ ನಿರ್ದೇಶಕ ಮಂಡಳಿಯ ಸದಸ್ಯರಾದ ಚಿನ್ನಪ್ಪಗೌಡ ಮಾಳಿ, ಹಣಮಗೌಡ ಗೂಗಲ್ಲ, ಪ್ರಭುಗೌಡ ಮದರಕಲ್ಲ, ಸುಭಾಷಚಂದ್ರ ಗುರಡ್ಡಿ, ಶರಣಗೌಡ ಇಬ್ರಾಹಿಂಪೂರ, ಶಾಂತಗೌಡ ಪಾಟೀಲ, ಶಾಂತಾ ಕಂತಲಗಾವಿ, ಸುಜಾತಾ ಮಂಗಳೂರು, ರಾಮಪ್ಪ ನಾಯಕ ಮೊದಲಾದವರು ಹಾಜರಿದ್ದರು.
ಹೊಸ ಆಡಳಿತ ಮಂಡಳಿಗೆ ಸಮಾಜದ ನಾಯಕರು ಹಾಗೂ ಬ್ಯಾಂಕಿನ ಸಿಬ್ಬಂದಿ ಶುಭ ಹಾರೈಸಿದ್ದು, ಸಂಘದ ಅಭಿವೃದ್ಧಿಗೆ ನೂತನ ತಂಡ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸವನ್ನು ಶೇರುದಾರರು ವ್ಯಕ್ತಪಡಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
