ವರದಿಗಾರರು :
ಹೆಚ್ ಎಂ ಹವಾಲ್ದಾರ್ ||
ಸ್ಥಳ :
ಬಾಗಲಕೋಟೆ
ವರದಿ ದಿನಾಂಕ :
17-10-2025
ಟ್ರಾನ್ಸ್ಫಾರ್ಮರ್ ಶಾರ್ಟ್ ಸರ್ಕ್ಯೂಟ್ನಿಂದ ಕಬ್ಬಿನ ಗದ್ದೆಗೆ ಬೆಂಕಿ!
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲಕ್ಷಾನಟ್ಟಿ ಗ್ರಾಮದಲ್ಲಿ ನಡೆದ ದುರಂತ — ರೈತ ಲೋಕನಗೌಡ ಪಾಟಿಲ್ ಅವರ 10 ಎಕರೆ ಕಬ್ಬಿನ ಬೆಳೆ ಬೆಂಕಿಗೆ ಆಹುತಿ!
ಟ್ರಾನ್ಸ್ಫಾರ್ಮರ್ ಲೈನ್ ತುಂಡಾಗಿ ಬಿದ್ದ ಪರಿಣಾಮ ಕಬ್ಬಿನ ಗದ್ದೆ ಬೆಂಕಿಗಾಹುತಿ ಆಗಿದ್ದು, ಬೆಂಕಿ ನಂದಿಸಲು ನೆರೆಹೊರೆಯ ರೈತರು ಹರಸಾಹಸ ಪಡುತ್ತಿದ್ದಾರೆ. ಬಕೆಟ್ಗಳಿಂದ ನೀರು ಎರಚಿ ಉಳಿದ ಬೆಳೆ ರಕ್ಷಿಸಲು ಪ್ರಯತ್ನ ನಡೆಯುತ್ತಿದೆ.
ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆ ಕ್ಷಣದಲ್ಲಿ ಭಸ್ಮವಾದ ವಿಷಾದನೀಯ ಘಟನೆ.
